ಗಂಗೋತ್ರಿಯಲ್ಲಿ ರಾತ್ರಿ

ಗಂಗೋತ್ರಿಯಲ್ಲಿ ರಾತ್ರಿ
ರೋಡುಗಳೇಕೆ ನಡೆಯುವುದಿಲ್ಲ
ಕಟ್ಟಡಗಳೇಕೆ ತೆರೆಯುವುದಿಲ್ಲ
ಮರಗಳು ನಿಂತದ್ದೇಕೆ
ಮಣ್ಣು ಮಲಗಿದ್ದೇಕೆ
ಸಮಯ ಯಾಕೆ ತುಂಡಾಗಿದೆ ಹೀಗೆ
ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ
ವ್ಯವಾಗುತ್ತಿದೆ

ನನಗೆ ಗೊತ್ತಿರುವ ಸಮುದ್ರದಂಡೆಗೆ
ಎಷ್ಟು ದೂರ ಇಲ್ಲಿಂದ
ಎಲ್ಲಿ ಮೊಗವೀರರ ದೋಣಿಗಳು
ದೋಣಿಗಳಾಗಿರದೆ ತಿಮಿಂಗಿಲಗಳಾಗುತ್ತವೆ
ನಿದ್ರಾವಸ್ಥೆ ಸುಮ್ಮನೆ ಜಡವಾಗದೆ
ಕೈಕಾಲು ತೊಡೆಗಳ ಸಂಬಂಧದಲ್ಲಿ
ವೀರ್ಯಗೊಳ್ಳುತ್ತದೆ
ಉಪ್ಪು ನೀರಿನ ನಿಲ್ಲದ ತೆರೆಗಳಲ್ಲಿ
ಶ್ವಾಸ ಸ್ವೀಕರಿಸುತ್ತದೆ ಬಿಡುತ್ತದೆ

ಅಂಥ ರಾತ್ರಿ ಇದಲ್ಲ
ಗಂಗೋತ್ರಿಯಲ್ಲಿ ರಾತ್ರಿ
ಕುಕ್ಕನಹಳ್ಳಿನ ಹೆಪ್ಪಿನಂತೆ ಥಂಡಿ
ಬರೇ ಆಕಾಶ ನೆಲಕ್ಕೆ ಕವುಚಿ
ಒಂದರೊಳಗೊಂದು ಜಾರಿ
ಉಂಟಾದ ಗೋಲ

ಕ್ರಮೇಣ ಕುಗ್ಗುತ್ತಿದೆ-ಸ್ಫೋಟಿಸುವುದಿಲ್ಲ
ಇದರ ಮೈಯಾಚೆಗೆ ಏನೂ ಕಾಣಿಸುತ್ತಿಲ್ಲ
ಆಚೆ ಕಣಿವೆ ಬಯಲುಗಳ ಓರೆಕೋರೆಗಳಲ್ಲಿ
ಕತ್ತಲೊ ಮಬ್ಬೊ ಹಗಲಿದ್ದರೂ ಇದ್ದೀತು
ಅಂಥ ಅವ್ಯಕ್ತ ವಲಯಗಳಲ್ಲಿ ಯಾವ ಜನ ಯಾವ ಭಾಷೆ
ಇಲ್ಲಿ ಮಗ್ಗಲು ಬದಲಿಸಿದಾಗ ಅಲ್ಲಿ ಏನಾಗುತ್ತದೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ ಒದ್ದಾಡ್ತಿಯಾ
Next post ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys